Wednesday, March 30, 2016



Image result for images havyaka

Image result for images havyaka27.03.2016


Shree Akhila HAVYAKA MAHASABHA elections are over. The efforts of getting a brute majority is successful. The mindset of getting absolute bullshit majority in the governing board to empower unquestionable authority has not changed. It is replaced by different set of people. The means adopted to gain this majority though questionable is accepted in the modern Democratic society. 

The method adopted to win the elections has awakened the sleeping and dormant HAVYAKA community. The expectations from this newly elected directors have made the community to be watchful about their performance in the coming days. The inefficient way of handling the process of election for about 3000 + members of MAHASABHA attended has made the members violent but made them to subside their anger to the undercurrent gurubhakti. 


What is there in store for future of HAVYAKA community would be revealed in the coming days. We shall have patience ànd wish them best in the coming days for the welfare of HAVYAKA S in general.
 



Image result for images havyaka

Saturday, August 16, 2014

"ಯಕ್ಷಗಾನ ಬ್ಯಾಲೆ" - "ಅಭಿಮನ್ಯು ವಧೆ "

ದಿ. ಶಿವರಾಮ ಕಾರಂತರ ಧೀ ಶಕ್ತಿಯಿಂದ ಜನ್ಮ ಪಡೆದ , ಶ್ರೀಮತಿ ಮಾಲಿನಿ ಮಲ್ಯರ ಛಲದಿಂದ ಮತ್ತು ಸಾಸ್ತಾನ ದಂಪತಿಗಳ ಪರಿಶ್ರಮದಿಂದ ಮರುಹುಟ್ಟು ಪಡೆದು ದಿನಾಂಕ  16.08.2014 ರಂದು ಪ್ರದರ್ಶನಗೊಂಡ ಯಕ್ಷಗಾನ ಬ್ಯಾಲೆ  "ಅಭಿಮನ್ಯು ವಧೆ " ಯಲ್ಲಿ ಪ್ರೇಕ್ಷಕನಾಗಿದ್ದೆ. 


ಸಭಾಂಗಣ ತುಂಬಿತ್ತು . ಆಗಮಿಸಿದ ಪ್ರೇಕ್ಷಕರಿಗೆ ನಿರಾಸೆಯಾಗಲಿಲ್ಲ. ಎಲ್ಲ ಪ್ರಕಾರದ ಕಲಾವಿದರಿಂದ ಅಭಿನಂದನೀಯ   ಪ್ರದರ್ಶನ ಇದಾಗಿತ್ತು. ರಾಧಾಕೃಷ್ಣ ಉರಾಳರ ಸ್ತ್ರೀ ಪಾತ್ರದಲ್ಲಿದ್ದ ದು:ಖ ರಸ ವ್ಯಕ್ತನೆ ಪ್ರೇಕ್ಷಕನನನ್ನು ತಾಯಿ ಮಮತೆಯ ಸಾಗರಕ್ಕೆ ಕೊಂಡೊಯ್ದಿತು.  ಯಕ್ಷಗಾನದ ಹೆಮ್ಮೆಯ ಮೃದಂಗ  ಕಲಾವಿದ ಪಾಠಕರ ಕಲಾ ನೈಪುಣ್ಯತೆಯನ್ನು  ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕ ಸೋತಂತೆ ಅನಿಸಿತು. 


ಯಕ್ಷಗಾನದ ಕಲಾ ಪ್ರಕಾರಗಳ ಪ್ರದರ್ಶನದಲ್ಲಿ ಸದಾ ಬಿಲ್ಲು ಹಿಡಿದ ಅರ್ಜುನ ಮತ್ತು ಗಧೆಯನ್ನೇ ಸದಾ ಬಳಸುವ ದುರ್ಯೋಧನ ಇವರನ್ನು ನೋಡಿದ ಯಕ್ಷ ಪ್ರೇಕ್ಷಕರಿಗೆ ಈ ದಿನದ ಪ್ರದರ್ಶನದಲ್ಲಿ  ಅರ್ಜುನ ಸಮಸಪ್ತಕರೊಡನೆ ಯುದ್ಧ ಮಾಡುವಾಗ ಕತ್ತಿ  ಹಿಡಿದು ಯುದ್ಧ ಮಾಡಿದಂತೆ ಮತ್ತು ದುರ್ಯೋಧನ ಅಭಿಮನ್ಯುವಿನೊಡನೆ ಯುದ್ಧ ಮಾಡುವಾಗ ಬಿಲ್ಲು ಹಿಡಿದು ಯುದ್ಧ ಮಾಡಿದಂತೆ ನೀಡಿದ ವ್ಯಕ್ತನೆ ಆಭಾಸವನ್ನುಂಟುಮಾಡಿತು.  


ಯಕ್ಷಗಾನ ನವರಸಗಳ ಅಭಿವ್ಯಕ್ತನೆಯನ್ನೊಳಗೊಂಡ ಕಲಾಪ್ರಕಾರಗಳಲ್ಲೊಂದು.  ಯಕ್ಷಗಾನದಿಂದ ತನ್ನ ಇರುವನ್ನು ಪಡೆದ ಈ "ಯಕ್ಷಗಾನ ಬ್ಯಾಲೆ" ಯಲ್ಲಿ ಹಾಸ್ಯ ರಸದ ಕೊರತೆ ನಿಚ್ಚಳವಾಗಿ  ಎದ್ದು ಕಾಣುತ್ತಿತ್ತು  . ನಿರ್ದೇಶಕರು ಮತ್ತು ಸಂಘಟಕರು ಇತ್ತ ಗಮನಹರಿಸಿ ಹಾಸ್ಯ ರಸವನ್ನು ಸೂಕ್ತವಾಗಿ ಒಳಗೊಳ್ಳುವಂತೆ ಸನ್ನಿವೇಶ ಒಂದು ಅಥವಾ ಎರಡನ್ನು ಸೇರಿಸುವದು ಒಳಿತು ಎಂಬ ಅನಿಸಿಕೆ. 


ಒಂದೂವರೆ ಘಂಟೆ ಅವಧಿಯ ಈ ಪ್ರದರ್ಶನದಲ್ಲಿ  saxophone  ಮತ್ತು  violin  ಅಳವಡಿಸಿಕೊಂಡಿರುವದು ಪ್ರದರ್ಶನಕ್ಕೆ ಹೆಚ್ಚಿನ ಮೆರಗು ತಂದಿತು. ಈ ಎರಡು ವಾದ್ಯ ಪ್ರಕಾರಗಳನ್ನ್ನು ಅಳವಡಿಸಿಕೊಂಡಿರದಿದ್ದರೆ ಸನ್ನಿವೇಶಗಳು  ಕಲಾರಸಗಳನ್ನು ಪ್ರಭಲವಾಗಿ ಅಭಿವ್ಯಕ್ತಿಗೊಳಿಸುವಲ್ಲಿ  ಸೋಲುತ್ತಿದ್ದವು. 


ಈ ಬ್ಯಾಲೆ ಪದ್ಧತಿಯ ಕಲೆ ಕನ್ನಡಿಗರಿಗೆ ಅದರಲ್ಲೂ ಯಕ್ಷಗಾನ ಪ್ರೇಕ್ಷಕರಿಗೆ ಒಗ್ಗುವದು ಅನುಮಾನ. ಯಾವುದೇ ಕಲಾಪ್ರಕಾರವಿದ್ದರೂ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಕನ್ನಡಿಗ ಒಮ್ಮೆ ಪ್ರದರ್ಶನಕ್ಕೆ ಬಂದಾನು. ಯಕ್ಷಗಾನಕ್ಕೆ ಒಗ್ಗಿಕೊಂಡ ಪ್ರೇಕ್ಷಕ ಪುನಃ ಪುನಃ ಯಕ್ಷಗಾನ ಆಸ್ವಾದಿಸಲು ಬರುವಂತೆ ಈ ಬ್ಯಾಲೆಗೆ ಬರುವದು ಅನುಮಾನ. ಯಕ್ಷಗಾನ ಪ್ರೇಕ್ಷಕನಿಗೆ ಇಲ್ಲಿ ಕಾಣಬರುವ ಬಹು ದೊಡ್ಡ ಕೊರತೆ ಮಾತುಗಾರಿಕೆ ಇಲ್ಲದಿರುವದು , ಸಂವಹನ ಕ್ರಿಯೆಯಲ್ಲಿ ಮಾತು ಎಷ್ಟು ಪ್ರಾಮುಖ್ಯ ಎನ್ನುವದು ಈ ಬ್ಯಾಲೆಯನ್ನು ನೋಡಿದಾಗ ಅರಿವಿಗೆ ಬರುವದು .  ಅಲ್ಲದೇ ಇದೂ ಸಹ ನಮ್ಮ ಜನಮಾನಸದಲ್ಲಿರುವ ಗೊಂಬೆಯಾಟದ ಪ್ರಕಾರದ ಬದಲಾವಣೆಯೋ ಎನಿಸುವದು. ಇಲ್ಲಿ ಸಂಘಟಕರ , ನಿರ್ದೇಶಕರ ಮೇಲೆ ಏನೂ ಆರೋಪ ಮಾಡುವಂತಿಲ್ಲ. ನಮ್ಮ ಜನಮಾನಸದಲ್ಲಿ ಯಕ್ಷಗಾನ ಆ ಪರಿ ಹಾಸು ಹೊಕ್ಕಾಗಿ ಸ್ಥಾನ  ಪಡೆದಿರುವದರಿಂದ ಯಕ್ಷಗಾನ ಪ್ರೇಕ್ಷಕ ಬ್ಯಾಲೆಯನ್ನು ಒಮ್ಮೆ ಆಸ್ವಾದಿಸಬಹುದೇ ವಿನಃ ಯಕ್ಷಗಾನದಂತೆ ಪುನಃ ಪುನಃ ಸೆಳೆದು ತರುವದು ಅನುಮಾನ. 


ಇನ್ನು ಸಂಘಟಕರಿಗೆ ಮತ್ತು ನಿರ್ದೇಶಕರಿಗೆ ಒಂದು ಸಲಹೆ. ಬ್ಯಾಲೆ ರೂಪಕ ಉತ್ತರ ಭಾರತದಲ್ಲಿ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ  ಬಹು ಜನಪ್ರಿಯವಾಗಿರುವದರಿಂದ ಹಿಮ್ಮೇಳ ಒದಗಿಸುವ ಸಾಹಿತ್ಯವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಿಸಿ ಸೂಕ್ತ ಸ್ವರ ಸಂಯೋಜನೆ ಮಾಡಿದರೆ ಈ ಕಲಾ ಪ್ರಕಾರ "ಯಕ್ಷಗಾನ ಬ್ಯಾಲೆ " ಜಗತ್ತಿನಾದ್ಯಂತ  ಜನ ಮನ್ನಣೆ ಗಳಿಸೀತು ಮತ್ತು ಬಹುಕಾಲದ ವರೆಗೆ ಜನಮಾನಸದಲ್ಲಿ ನಿಂತೀತು . ಜೊತೆಗೆ ಯಕ್ಷಗಾನ ಕಲೆಗೂ ಪರೋಕ್ಷ ಸಹಾಯ ಒದಗಿ ಬಂದೀತು .  


https://www.facebook.com/hariharsatyanarayan.bhat


Tuesday, November 19, 2013

About : Shree Akhila Havyaka Mahasabha ® Bangalore.

About  :   Shree Akhila Havyaka Mahasabha ® Bangalore.


ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಲ್ಲೇಶ್ವರದಲ್ಲಿರುವ ಕಟ್ಟಡವನ್ನು ಉರುಳಿಸಿ ನೆಲಸಮ ಮಾಡಿ ಇಟ್ಟಿದ್ದು ನಿಮ್ಮೆಲ್ಲರ ಗಮನದಲ್ಲಿದೆ ತಾನೇ?


ಕಟ್ಟಡದ ಪುನರ್ ನಿರ್ಮಾಣಕ್ಕೆ ನಿಮ್ಮೆಲ್ಲರಲ್ಲಿ ಹಣದ ಸಹಾಯ ಕೇಳಲು ಬರುತ್ತಿದ್ದಾರೆ, ಬರುವವರಿದ್ದಾರೆ ತಾನೇ? ಆಗ ಪದಾಧಿಕಾರಿಗಳಿಗೆ ಈ ಪ್ರಶ್ನೆಗಳನ್ನು ಕೇಳಲು ಮರೆಯದಿರಿ:


೧. ಸಾಕಷ್ಟು ಮೊತ್ತದ  ಆದಾಯವನ್ನು ತರುತ್ತಿರುವ ಕಟ್ಟಡವನ್ನು ಪುನರನಿರ್ಮಾಣಕ್ಕೆ ಬೇಕಾದ ಹಣ ಸಂಗ್ರಹವಾಗುವ ಮುನ್ನ ಕೆಡವುವಂತಹ ಅವಶ್ಯಕತೆ ಏನಿತ್ತು?  ವಸತಿಗೃಹದಲ್ಲಿರುವ ವಿಧ್ಯಾರ್ಥಿಗಳನ್ನು ಅವಧಿಗೆ ಮುನ್ನ ತೆರವುಗೊಳಿಸುವ ಅವಶ್ಯಕತೆ ಯಾಕಿತ್ತು?



೨.  ಕಟ್ಟಡ ನಕ್ಷೆ ತಯಾರಿ ಮಾಡಿ ಪೂರ್ವಾನುಮತಿ ಪಡೆಯುವ ಹಂತದಲ್ಲಿ ಎಡವಿದ್ದೇಕೆ?  ಅಲ್ಲಲ್ಲಿ ಕೇಳಿಬಂದಂತೆ ಒಮ್ಮೆ ಅರವತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಪಡೆದ ಪೂರ್ವಾನುಮತಿಯನ್ನು ಪುನಃ ಪರಿಶೀಲನೆಗೊಳಪಡಿಸಿ ಮತ್ತೆ ನಲವತ್ತೈದು ಸಾವಿರ ರೂಪಾಯಿ ಖರ್ಚು ಮಾಡುವ ಪ್ರಸಂಗವನ್ನು ತಂದಿತ್ತವರು ಯಾರು ಎಂಬುದನ್ನೇಕೆ ಸಾರ್ವಜನಿಕ ಪಡಿಸಲಿಲ್ಲ?  ಈ ರೀತಿ ಅಜಾಗರೂಕತೆಯಿಂದ ಸಮಾಜ ಬಾಂಧವರ ಹಣ ವ್ಯರ್ಥವಾದರೂ ಆ ರೀತಿಯ ಜನರನ್ನೇ ಏಕೆ ಅವಲಂಬಿಸಿ ಜವಾಬ್ದಾರಿ ಸ್ಥಾನದಲ್ಲಿ ಮುಂದುವರಿಸುತ್ತೀರಿ? ಇಲ್ಲಿ ಪದಾಧಿಕಾರಿಗಳ ಸ್ವ ಹಿತ ಅಡಗಿರುವದಾದರೂ ಏನು


೩.  ೨೦೧೩ ರಲ್ಲಿ ನಡೆದ ಚುನಾವಣೆಗೆ ಮತ್ತು ವಾರ್ಷಿಕ ಮಹಾಸಭೆಗೆ ಪೋಲಿಸ್ ರಕ್ಷಣೆ ಪಡೆಯುವಂತೆ ಸಂದರ್ಭಗಳನ್ನು ತಂದಿತ್ತ ಪದಾಧಿಕಾರಿಗಳ ಆಡಳಿತ ರೀತಿ ಹೇಸಿಗೆ ಹುಟ್ಟಿಸುವಂತಿಲ್ಲವೇ? ಜಗತ್ತಿನಲ್ಲೆಲ್ಲ ಸುಭಗರು, ಸೌಮ್ಯ ಮನೋಭಾವದ ಜನಾಂಗ , ಸುಸಂಕೃತರು, ವಿದ್ಯಾವಂತರು, ಸಹೃದಯಿಗಳು , ಶಾಂತಿಪ್ರಿಯರು ಎಂದೆಲ್ಲ ಶತಶತಮಾನಗಳಿಂದ ಹೆಸರುವಾಸಿಯಾದ ಸಮಾಜಕ್ಕೆ ಕಳಂಕ ತಂದಿರಲ್ಲವೇ


೪. ಏನಕೇನ ಪ್ರಕಾರೇಣ ಖುರ್ಚಿಯನ್ನುಳಿಸಿಕೊಳ್ಳಬೇಕು , ಗುಪ್ತ ಗುಪ್ತವಾಗಿ ಬಚ್ಚಿಟ್ಟ ಮಾಹಿತಿಗಳು ಹೊರಬರಬಾರದು ಎಂದು ತಮ್ಮ ಕೇರಿಯ, ಊರಿನ , ಯಾವುದೇ ಮೀಟಿಂಗ ಗಳಿಗೆ ಬರದ, ಬಂದರೂ ಎಲ್ಲ ಸುಮ್ಮನೆ ಹ್ನೂ ಎನ್ನಬಹುದಾದವರನ್ನೇ ಆಯ್ದು ಆಯ್ದು ಅಧಿಕಾರ ಬಲದಿಂದ ಸ್ಥಾನವನ್ನುಳಿಸಿಕೊಳ್ಳುವ ಹಪಾ ಹಪಿ ಯಿಂದ ಒಟ್ಟಾರೆ ಸಮಾಜಕ್ಕೆ ಹಾನಿಯಾಗುತ್ತಿದೆಯಲ್ಲವೇ


೫.  ಯಾವುದೇ ಸಾಮಾನ್ಯ ಸದಸ್ಯನೊಬ್ಬ ನಿಮ್ಮ ಕಾರ್ಯ ರೀತಿ ಕುರಿತು ಆಸಕ್ತಿ ವಹಿಸಿ ವಿಚಾರಿಸಿದರೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯನ್ನೇ ಹೊಂದಿಲ್ಲ. ಕೇವಲ ಕಾನೂನಿಗೋಸ್ಕರವಾಗಿ ಕಣ್ಣುಮುಚ್ಚಾಲೆಯ ಲೆಕ್ಕ  ಪತ್ರಗಳು , ಆಂತರಿಕ ವರದಿ , ವಾರ್ಷಿಕ ಸಭೆ ಎಂದು ಅಧಿಕಾರದ ದರ್ಪವನ್ನು ತೋರ್ಪಡಿಸುತ್ತೀರಿ. ಮಾತನಾಡುವವನ ಧ್ವನಿ  ಅಡಗಿಸುವ ತಂತ್ರಗಳನ್ನೆಲ್ಲ ಕಾರ್ಯಗತ ಮಾಡಿದ್ದೀರಿ ಎಂದು ಸ್ವಾಭಾವಿಕವಾಗಿ ತೋರ್ಪಡುವದು. ನಮ್ಮ ಸಮಾಜಕ್ಕೆ ಇವೆಲ್ಲ ಶೋಭೆ ತರಬಲ್ಲುದೇ ?


೬. ಒಟ್ಟಾರೆ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ನಮ್ಮ ಸಮಾಜ ಕಡಿಮೆ ಜನ  ಸಂಖ್ಯೆಯನ್ನು ಹೊಂದಿದೆ. ಈ ಸಮಾಜದಲ್ಲೇ ಹತ್ತಾರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿವೆ. ಅದೇ ರೀತಿ ವಿವಿಧ ರೀತಿಯ ಶಿಕ್ಷಣ ಪಡೆದ , ವಿವಿಧ ರೀತಿಯ ಉದ್ಯೋಗ ಕೈಗೊಂಡಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ಯಾವ ಕಾರ್ಯಗಳೂ ಈ ಸಂಸ್ಥೆಯಿಂದ ತೋರಿಬರುತ್ತಿಲ್ಲ.  ಶಾಲೆಯೊಂದರ ಚಟುವಟಿಕೆಗಳಂತೆ ಆಟೋಟ, ವರ್ಷದಲ್ಲಿ ಹತ್ತಾರು ವಿವಾಹ ಮಾಹಿತಿ ಬೈಠಕ್ಕಗಳು , ವರ್ಷಕ್ಕೊಮ್ಮೆ ಪುಸ್ತಕಗಳನ್ನು ಕೊಳ್ಳಲೂ  ಸಾಲದಾದಂತ ವಿಧ್ಯಾರ್ಥಿ ವೇತನಗಳು ಇವುಗಳನ್ನು ನೆಚ್ಚಿ ಚಟುವಟಿಕೆಗಳನ್ನು ಕೈಗೊಳ್ಳುವ ನಿಮ್ಮ ಮುಂದಾಳತ್ವವನ್ನು ಏಕೆ ಮತ್ತು ಹೇಗೆ ಮೆಚ್ಚಬೇಕು ? ಹಣಕಾಸು ವ್ಯವಹಾರದ ಸೂಕ್ತ ರೀತಿಯ ಪಾರದರ್ಶಕತೆ , ಎಲ್ಲ ರೀತಿಯ ಔದ್ಯೋಗಿಕ  ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಮಾಜ ಬಾಂಧವರ ಪ್ರತಿನಿಧಿತ್ವ ಆಡಳಿತ ಮಂಡಳಿಯಲ್ಲಿ ಇಲ್ಲದಿರುವಿಕೆ , ಹತ್ತಾರು ವರ್ಷಗಳಿಂದ ಅದೇ ನಿರ್ದೇಶಕರು ಮುಂದುವರಿದಿರುವಿಕೆ ಇತ್ಯಾದಿ ಅಂಷಗಳನ್ನೆಲ್ಲ ಗಣನೆಗೆ ತೆಗೆದುಕೊಂಡಾಗ ಪ್ರಸಕ್ತ ಮುಂದಾಳತ್ವದಲ್ಲಿ ಸಮಾಜ ಬಾಂಧವರಿಗೆಲ್ಲ  ವಿಶ್ವಾಸದ  ಕೊರತೆ ಸಹಜವಲ್ಲವೇ ? ಇಲ್ಲದಿದ್ದರೆ ಅರವತ್ತೆರಡು   ವರ್ಷಗಳ ಇತಿಹಾಸವಿರುವ  ಈ ಸಂಸ್ತೆ ಪ್ರವರ್ಧಮಾನಕ್ಕೆ ಬರದಿರುತ್ತಿತ್ತೇ ?


೭. ಸಮಾಜದಲ್ಲಿ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರು , ಈ ರೀತಿ ಜನಗಳಿಗೆ ಸಾಮಾಜಿಕ ಸಂಸ್ಥೆಗಳಿಂದ ಸೂಕ್ತ ಸಹಾಯ ಸೌಲಭ್ಯಗಳ ಅವಶ್ಯಕತೆಯಿರುತ್ತದೆ. ಈಗ ಹಾಲಿ ನೀವು ನಡೆಸುತ್ತಿರುವ ಯಾವ ವಿಧ್ಯಾರ್ಥಿನಿಲಯಗಳಲ್ಲಿ ಎಷ್ಟು ಅಸಹಾಯಕ ಬಡ ಮಕ್ಕಳಿಗೆ ಉಚಿತ ಸೌಲಭ್ಯ  ನೀಡಿದ್ದೀರಿ? ಸಮಾಜ ಬಾಂಧವರಿಂದ ಸಂಗ್ರಹಿಸಿದ ಹಣದಿಂದ  ವಿಧ್ಯಾರ್ಥಿನಿಲಯಗಳನ್ನು ಕಟ್ಟಿ ಉಳ್ಳವರ ಮಕ್ಕಳಿಗೆ ಸೌಲಭ್ಯ  ಒದಗಿಸಿ ಆದಾಯದ ಮೂಲ ವರ್ಧಿಸಬೇಕೆಂಬ ನಿಮ್ಮ ಧೋರಣೆಯನ್ನು ನಾವ್ಯಾಕೆ ಅನುಮೋದಿಸಿ ಹಣಕಾಸಿನ ದೇಣಿಗೆ ನೀಡಬೇಕು?


  ಈ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳುವ ಅಧಿಕಾರ , ಜವಾಬ್ದಾರಿ ಎಲ್ಲ ಸಾಮಾನ್ಯ ಸದಸ್ಯರಿಗೆ ಇರುತ್ತದೆ. ಅದೇ ರೀತಿ ಸಾಮಾನ್ಯ ಸದಸ್ಯರು ಜಾಗ್ರತರಾಗಿದ್ದಲ್ಲಿ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವ ಅರಿವು ಉಂಟಾಗುತ್ತದೆ. ಸಮಾಜ ಅಭಿವೃದ್ಧಿ ಕಾಣುತ್ತದೆ. ಅಭಿವೃದ್ಧಿಯಾದ ಸಮಾಜ ಸುಖ , ನೆಮ್ಮದಿಗಳಿಂದ  ಮಿನುಗುತ್ತದೆ. ತಪ್ಪಿದಲ್ಲಿ ಪದಾಧಿಕಾರಿಗಳಷ್ಟೇ ಮಿನುಗುತ್ತಾರೆ ಮತ್ತು ಒಮ್ಮೆ ಮಿನುಗುವ ಬೆಳಕಿನ ಅಭಿಲಾಷೆ ಪಡೆದರೆ ಇನ್ಯಾರೂ ಹತ್ತಿರ ಸುಳಿಯದಂತೆ ವ್ಯೂಹ ರಚಿಸುತ್ತಿರುತ್ತಾರೆ. 


ಸದಸ್ಯರಾಗಿದ್ದವರ ಮನೆಗಳಿಗೆಲ್ಲ ಬಂದ ಹವ್ಯಕ ಪತ್ರಿಕೆ ಸಂಚಿಕೆಯಲ್ಲಿರುವ ಪದಾಧಿಕಾರಿಗಳ ಗುಣ ವಿಶೇಷತೆಗಳನ್ನು ಕಂಡುಕೊಳ್ಳಿ . ನಿಮಗೆಲ್ಲ ನನಗಿಂತ ಹೆಚ್ಚಿನ ಅರಿವು ಇದೆ. ನಿಮ್ಮ ಭೆಟ್ಟಿಗೆ ಪದಾಧಿಕಾರಿಗಳು ಬಂದಾಗ ನಮ್ಮೂರಿನವ, ನಮ್ಮ ಕೇರಿಯವ, ನಮ್ಮ ಮಗ, ನಮ್ಮ ಬಾಂಧವ ಎಂಬುದನ್ನು ನೆನಪಿಸಿಕೊಂಡು ಟೀ , ಕಾಫಿ ಯೊಂದಿಗೆ ಸತ್ಕರಿಸಿ. ದೇಣಿಗೆಯ ಆಶ್ವಾಸನೆ ನೀಡುವ ಮುನ್ನ ಈ  ಮೇಲೆ ಹೇಳಿದ ಎಲ್ಲ ವಿಚಾರಗಳನ್ನು ಅವರೊಂದಿಗೆ ಕೂಲಂಕುಶವಾಗಿ ಪ್ರಶ್ನಿಸಿ , ಸಮಾಜದಲ್ಲಿ ಸಂಘಟನೆಗೆ ಸ್ಪಂದಿಸಿ ಎಂಬ ಅರಿಕೆ. 


ನಮ್ಮ ಸಮಾಜ ಬಾಂಧವರ ಸಂಖ್ಯೆ ನಾಲ್ಕರಿಂದ ಐದು ಲಕ್ಷ ಎಂದು ಒಂದು ಅಂಬೋಣ. ಅಂದರೆ ಸಾಮಾನ್ಯವಾಗಿ ನಲವತ್ತೈದರಿಂದ ಅರವತ್ತು ಸಾವಿರ ಕುಟುಂಬಗಳಿರಬಹುದು. ಈ ಶ್ರೀ ಅಖಿಲ ಹವ್ಯಕ ಮಹಾಸಭಾ ದ ಸದಸ್ಯ ಸಂಖ್ಯೆ  ಕೇವಲ ಹದಿನಾರು , ಹದಿನೇಳು ಸಾವಿರಗಳು ಮಾತ್ರ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ. ಹೆಚ್ಚು ಹೆಚ್ಚು ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಂಡು , ಜವಾಬ್ದಾರಿಯುತ ಪದಾಧಿಕಾರಿಗಳನ್ನು ಸಂಘಟನೆಗೆ ನೀಡಿ ಎಂಬ ಬಿನ್ನಹ. 


ಈ ಅಹವಾಲನ್ನು ಎಲ್ಲ ಹವ್ಯಕರಿಗೆ, ಎಲ್ಲ ಹವ್ಯಕ ಕುಟುಂಬಗಳಿಗೆ ತಲುಪಿಸುವ  ಜವಾಬ್ದಾರಿ  ತಮ್ಮದೆಲ್ಲರದ್ದಾಗಿದೆ. ಪ್ರಯತ್ನಪೂರ್ವಕವಾಗಿ ಈ ವಿಚಾರಗಳನ್ನು ಹೆಚ್ಚು  ಹೆಚ್ಚು ಪ್ರಚಾರ ಮಾಡಿ, ಪದಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಸಮಾಜ ಬಾಂಧವರಲ್ಲೆಲ್ಲಾ ಬೆಳೆಸಿ ಎಂಬ ಅರಿಕೆಯೊಂದಿಗೆ,


ಹರಿಹರ . ಎಸ್.  ಭಟ್ , ಬೆಂಗಳೂರು. 
ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಸಾಮಾನ್ಯ ಸದಸ್ಯ. 

ನವೆಂಬರ್ ೨೦, ೨೦೧೩.   


Friday, October 4, 2013

Let our journalism friends introspect.

ಜನರನ್ನು  ಬೇಸ್ತು ಬೀಳಿಸುವ ಸುದ್ದಿ ಮಾಧ್ಯಮಗಳು ಮತ್ತು ಟೀ . ವಿ ವಾಹಿನಿಗಳು .


ಈ ದಿನಗಳಲ್ಲಿ ಯಾವುದೇ ಸುದ್ದಿ ಮೂಲಗಳ ಸತ್ಯಾಸತ್ಯತೆಯನ್ನು ಅರಿಯುವ ಗೋಜಿಗೆ ಹೋಗದೆ , ಟಿ. ಆರ್. ಪಿ ಹೆಚ್ಚಿಸುವ ಒಂದೇ ಉದ್ದೇಶದಿಂದ ಯಾರೋ ಪುಂಡ ಪೋಕರಿಗಳು ನೀಡುವ  ಸುದ್ದಿಯನ್ನು ಆಧರಿಸಿ ಕೂಡಲೇ ಪ್ರಸಾರ ಮಾಡುವ ತೆವಲಿನಿಂದ ಸುದ್ದಿ ಮಾಧ್ಯಮಗಳು ಹೊರ ಬರಬೆಕಾಗಿದೆ . ಅಲ್ಲದೆ ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಅನುಕೂಲವಾಗುವಂತೆ ಎರಡು ಮೂರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಮುಂತಾದವುಗಳ ಒಡೆತನ ಹೊಂದಿ, ಒಂದೆಡೆ ನೀಡಿದ ಸುದ್ದಿ ಸುಳ್ಳೆಂದು ಜಗ ಜಾಹೀರಾದಾಗ , ಆ ಸುದ್ದಿ ಸುಳ್ಳೆಂದು ತಿಳಿದುಬಂದಿದೆಯೆಂದು ಇನ್ನೊಂದು ತಮ್ಮದೇ ಒಡೆತನದ ಸುದ್ದಿ ಮಾದ್ಯಮದಲ್ಲಿ ಪ್ರಕಟಿಸಿ , ತಮ್ಮ ಅಜಾಗರೂಕತೆಯನ್ನು ಮುಚ್ಚಿಹಾಕುವ ಪ್ರವ್ರತ್ತಿ ಜಾಸ್ತಿಯಾಗುತ್ತಿದೆ.



ಮಾಧ್ಯಮ ಮಿತ್ರರ ಈ   ಟಿ.  ಆರ್. ಪಿ  ತೆವಲುಗಳನ್ನು ದುರುಪಯೋಗಪಡಿಸಿಕೊಂಡು ಸಮಾಜ ಘಾತುಕ ವ್ಯಕ್ತಿಗಳು, ರಾಜಕೀಯ ವಿರೋಧಿಗಳ ವಿರುದ್ಧ ಪಿತೂರಿ ನಡೆಸಿ ತಮ್ಮ ಬೇಳೆ ಬೇಯ್ಸಿಕೊಳ್ಳುವ ಕುಟಿಲ ರಾಜಕಾರಣಿಗಳು........ ಇತ್ಯಾದಿ ವ್ಯವಸ್ಥೆಯ ದುರುಪಯೋಗಪಡಿಸಿಕೊಳ್ಳುತ್ತಿರುವದು ಆಘಾತಕಾರಿ ವಿಚಾರ.



ಆದರಿಂದ ತಮ್ಮ ಮೇಲೆ ಸದಾ ಸ್ವನಿಯಂತ್ರಣ ಹೊಂದಿರಲಿ, ಸಮಾಜಕ್ಕೆ ಪತ್ರಿಕಾ ಮಿತ್ರರಿಂದ ಒಳ್ಳೆಯ ಸಂದೇಶಗಳು ರವಾನಿಸಲ್ಪಡಲಿ, ಸ್ವಸ್ತ  ಸಮಾಜ ಕೆಡಲು ಪತ್ರಿಕಾ ಮಿತ್ರರ ಕೊಡುಗೆ ಇರದಿರಲಿ ಮತ್ತು ಈ ದಿಶೆಯಲ್ಲಿ  ಪತ್ರಿಕಾ ಮಿತ್ರರು  ಸ್ವ ಅವಲೋಕನ ಮಾಡಿಕೊಳ್ಳಲಿ ಎಂಬ ಸದಾಶಯ ಇಂದಿನ ಕಾಲಘಟ್ಟದಲ್ಲಿ  ಬಹು ಪ್ರಸ್ತುತವಾಗುತ್ತಿದೆ.



ಹರಿಹರ ಭಟ್, ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ
ಸೆಪ್ಟೆಂಬರ್ ೦೫ , ೨೦೧೩
www.facebook.com/hariharsatyanarayan.bhat
www.hariharbhat.blogspot.com

Saturday, September 28, 2013

ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?

                                     ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ?


ನಿಮ್ಮ ಏ. ಟಿ . ಎಂ ಕಾರ್ಡ್ ಬಗೆಗೆ ನೀವೆಸ್ಟು ತಿಳಿದಿದ್ದೀರಿ ? ಇಂದು ಎಲ್ಲರ ಕೈಲೂ ಏ. ಟಿ. ಎಂ ಕಾರ್ಡ್ ಇದ್ದೇ ಇರುತ್ತದೆ. ಸಾಧಾರಣವಾಗಿ ಪ್ರಯಾಣ ಸಮಯದಲ್ಲಿ, ಯಾವುದಾದರೂ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕಾರ್ಡ್ ಕಳೆಯುವ ಸಾಧ್ಯತೆಗಳಿವೆ. ಆಗ ಒಮ್ಮೆಲೇ ನಾವು ಗಾಬರಿಯಾಗುತ್ತೇವೆ. ಕೆಲವೊಮ್ಮೆ ನಮ್ಮ ಅಜಾಗರೂಕತೆಯಿಂದ ಕಾರ್ಡ್ ಎಲ್ಲೆಲ್ಲೋ ಬಿಟ್ಟಿರುತ್ತೇವೆ. ಹಾಗಾಗಿ ಏ. ಟಿ. ಎಂ ಕಾರ್ಡ್ ಬಗ್ಗೆ ನಾವು ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿ ಪಡೆಯೋಣ.


ಯಾವುದೇ ರೀತಿಯ ಎಸ್. ಎಮ್. ಎಸ್ ಗಳು , ಮೇಲ್ ಗಳು ಬಂದರೂ ನಿಮ್ಮ ಏ.ಟಿ.ಎಮ್ ಕಾರ್ಡ್ ಮಾಹಿತಿಯನ್ನು ನೀಡಬೇಡಿ. ಅಲ್ಲದೆ ಬ್ಯಾಂ ಕ್ ಸಿಬ್ಬಂಧಿ ಅಥವಾ ಇನ್ಯಾರೇ ಪರಿಚಿತರು ಕೇಳಿದರೂ ಸಹ ನಿಮ್ಮ ಏ.ಟಿ.ಎಮ್ ಕಾರ್ಡ್ ವಿವರ / ಪಿನ್ ನಂಬರ್ / ಮಾಹಿತಿ ನೀಡಬೇಡಿ.


ನೀವು ಏ.ಟಿ.ಎಮ್ ನಿಂದ ಹಣ ತೆಗೆದಾಗ ಅಥವಾ ಇನ್ನ್ಯಾರೇ ಅನಧಿಕ್ರತವಾಗಿ ನಿಮ್ಮ ಖಾತೆಯಲ್ಲಿ ವ್ಯವಹಾರ ಮಾಡಿದರೆ ಅದರ ಮಾಹಿತಿ ಎಸ್.ಎಮ್.ಎಸ್ ಮೂಲಕ ಪಡೆಯುವ ಸೌಲಭ್ಯ ಇದೆ. ಈ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ದಾಖಲಾತಿ ಮಾಡಿ. 



ಮೊದಲನೇ ಸಲ ಬಳಸಿದ ಪಿನ್ ಬದಲಾಯಿಸಿ ಮತ್ತು ಆ ನಂತರ ಆಗಾಗ ಪಿನ್ ಬದಲಾಯಿಸುತ್ತಿರಿ. 



ಯಾವತ್ತೇ ಆದರೂ ಪಿನ್ ಬರೆದಿರುವ ಚೀಟಿಯನ್ನು ಕಾರ್ಡ್ ಜೊತೆ ಇಡಬೇಡಿ ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯಬೇಡಿ.

ಪಿನ್ ನೆನಪಿನಲ್ಲಿಡುವದೇ ಉತ್ತಮ ವಿಧಾನ. 



ಏ.ಟಿ.ಏಮ್ ಅಥವಾ ಅಂಗಡಿ ಗಳಲ್ಲಿ ಖರೀದಿ ಮಾಡುವಾಗ ಕೀ ಪ್ಯಾಡ್ ಮೇಲೆ ಕೈ ಮರೆ ಮಾಡಿ ಪಿನ್ ನಂಬರ್ ಒತ್ತಿ.


ನೀವು ಏ.ಟಿ.ಏಮ್ ರೂಮ್ನಲ್ಲಿರುವಾಗ ಯಾರನ್ನು ಒಳಪ್ರವೇಶಿಸಲು ಬಿಡಬೇಡಿ. ಅಪರಿಚಿತರ ಸಹಾಯವನ್ನು ಎಂದೂ ಅಪೇಕ್ಷಿಸಬೇಡಿ.



ಹೊಸ ಏ.ಟಿ.ಏಮ್ ಕಾರ್ಡ್ ಪಡೆದರೆ , ಹಳೆ ಕಾರ್ಡ್ ನ್ನು ಬ್ಲಾಕ್ ಮಾಡಿ ಮತ್ತು ಹಳೆ ಕಾರ್ಡ್ ನ್ನು ಹರಿದು ಹಾಕಿ. 



ಅಂಗಡಿಗಳಲ್ಲಿ, ಹೋಟೆಲ್ ಗಳಲ್ಲಿ, ಮಾಲ್ ಗಳಲ್ಲಿ ಏ.ಟಿ.ಏಮ್ ಕಾರ್ಡ್ ಬಳಸುವಾಗ ನೀವು ಎದುರು ನಿಂತಿರಿ , ಇನ್ನೆಲ್ಲಿಯೋ ಒಯ್ದು ಸ್ವೈಪ್ ಮಾಡಲು ಒಪ್ಪಬೇಡಿ.


ನೀವು ಪಡೆದ ರಸೀತಿ ಯನ್ನು ಏ.ಟಿ.ಏಮ್ ರೂಮ್ ನಲ್ಲಿ ಬಿಸಾಕಬೇಡಿ. ಜೊತೆಗೆ ತೆಗೆದುಕೊಂಡು ಹೋಗಿ ಹರಿದು ಇನ್ನೆಲ್ಲೋ ಬಿಸಾಕಿರಿ. 



ಯಾವಾಗಲಾದರೂ ಏ.ಟಿ.ಎಂ ಮಷೀನ್ ಗೆ ಇನ್ನೇನಾದರೂ ಹೆಚ್ಚಿನ ಚಿಕ್ಕ ಪುಟ್ಟ ಸಲಕರಣೆ ಜೋಡಿಸಿದ್ದು ಗಮನಕ್ಕೆ ಬಂದರೆ ಆ ಏ.ಟಿ.ಎಮ್ ನಲ್ಲಿ ವ್ಯವಹರಿಸಬೇಡಿ.


ನೀವು ಮಾಡಿದ ಏ.ಟಿ.ಎಮ್ ವ್ಯವಹಾರದ ಬಗ್ಗೆ ನಿಮ್ಮ ಪಾಸ್ ಬುಕ್ ಜೊತೆ ಆಗಾಗ ತುಲನಾತ್ಮಕವಾಗಿ ಅಭ್ಯಾಸ ಮಾಡಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದರೆ ಸಮಯ ವ್ಯತ ಮಾಡದೆ ಕೂಡಲೇ ನಿಮ್ಮ ಕಾರ್ಡನ್ನು ಹಾಟ್ ಲಿಸ್ಟ್ ಗೆ ಸೇರಿಸಿ. 



ನಿಮ್ಮ ಏ.ಟಿ.ಎಮ್ ಕಾರ್ಡ್ ಕಳೆದಾಗ ಹಾಟ್ ಲಿಸ್ಟ್ ಗೆ ಸೇರಿಸಲು ನಿಮ್ಮ ಬ್ಯಾಂಕ್ ನ ದೂರವಾಣಿ ನಂಬರ್ ನ್ನು ನಿಮ್ಮೊಡನೆ ಸದಾ ಇರಿಸಿಕೊಳ್ಳಿ . 



ಕೆಲವು ಬ್ಯಾಂಕ್ ಗಳ ದೂರವಾಣಿ ಸಂಖ್ಯೆ , ಹಾಟ್ ಲಿಸ್ಟ್ ಗೆ ಸೇರಿಸಲು ಹೀಗಿದೆ : 



State Bank of India 1800-112211



State Bank of Mysore 1800 - 425 -3800 ; 1800 - 112211 ; 080 - 26599990



Canara Bank 1800 - 425 - 6000 ; 1800 - 425 - 07000



Corporation Bank 1800 - 425 - 2407 ; 080 - 26600587 ; 080 - 26602500



Syndicate Bank 1800 - 425 - 0585 ; 09483522433 



Vijaya Bank 1800 - 425 - 9992 ; 080 - 41133500



ಈ ರೀತಿಯಲ್ಲಿ ಕಾಳಜಿ ವಹಿಸಿರಿ. ಕಾರ್ಡ್ ಕಳೆದಾಗ ಗೊಂದಲವಾಗುವದು ಸಹಜವಾದುದು. ಆದರೆ ದೃತಿ ಗೆಡಬೇಡಿ. ಕೂಡಲೇ ಕಾರ್ಯಪೃವೃತ್ತರಾಗಿ. 



ನಿಮ್ಮ ಏ.ಟಿ.ಎಮ್  ಕಾರ್ಡ್ ಕಳೆದಾಗ , ಕಾರ್ಡ್ ಬ್ಲಾಕ್ ಮಾಡಲು ತಡ ಮಾಡಿದರೆ ಕಾರ್ಡ್ ಸಿಕ್ಕವರು ಕೂಡಲೇ ಬೇರೆ ಬೇರೆ ಅಂಗಡಿಗಳಿಗೆ ಹೋಗಿ ನಿಮ್ಮ ಕಾರ್ಡ್ ಸ್ವೈಪ್ ಮಾಡಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಜಾಸ್ತಿ.  ಆದ ಕಾರಣ ನಿಮಗೆ ಆಗುವ ಹಾನಿ ತಪ್ಪಿಸಲು ಕಾರ್ಡ್ ಕಳೆದ ಕೂಡಲೇ , ಕಾರ್ಡ್ ಬ್ಲಾಕ್ ಮಾಡಿ. ತಡ ಮಾಡಬೇಡಿ, ನೆನಪಿರಲಿ. 


                                                                  **********

Monday, September 2, 2013

ದೊಡ್ಡವರ ಸಣ್ಣತನಗಳು.

ದಿನ  ಕಳೆದಂತೆ  ದೊಡ್ಡವರು, ಪ್ರಭಾವಿಗಳು ಎನ್ನುವವರು ಅತಿ ಸಂಕುಚಿತ ಮನೋಭಾವನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಾಕೋ ಎನೋ ಸಮಾಜಕ್ಕೆ ಆದರ್ಶವಾಗಿರಬೇಕಾದವರೇ ಪಾಠ ಹೇಳಿಸಿಕೊಳ್ಳುವ ಸ್ಥಿತಿ ತಲುಪುತ್ತಿರುವದು ಶೋಚನೀಯ.


ನಿನ್ನೆಯೋ ಮೊನ್ನೆಯೋ , ದಿನಪತ್ರಿಕೆಯೊಂದರ ವರದಿಯಲ್ಲಿ,  ದೀಪಬೆಳಗುತ್ತಿರುವವರಲ್ಲಿ ಒಬ್ಬರಾದ ಕರ್ನಾಟಕದ ರಾಷ್ಟ್ರಮಟ್ಟದ ನಾಯಕರ ಬಗೆಗೆ ಒಂದೇ ಒಂದು ಶಬ್ದ ಬರೆದಿಲ್ಲ. ಅವರು ಮಾಡಿದ ಭಾಷಣದ ಕುರಿತು ಒಂದು ಅಕ್ಷರವೂ ಇಲ್ಲ. ವರದಿಗಾರರೇನಾದರೂ ತಪ್ಪಿದರೇ  ಎಂದರೆ ಸುಲಭವಾಗಿ ಒಪ್ಪಲಾಗದು. ಸಂಪಾದಕರ, ಪತ್ರಿಕೆ ಮಾಲಿಕರ ಒಡಂಬಡಿಕೆಯೇ ಈ ರೀತಿ ಪತ್ರಿಕಾ ಧರ್ಮದ ವಿರೋಧೀ ನಿರ್ಣಯಗಳಿಗೆ ಹೇತುವಾಗಬಲ್ಲುದು ತಾನೇ?


ಇಂದಿನ ದಿನ ಪತ್ರಿಕೆಯೊಂದರಲ್ಲಿ, ವರದಿಯಲ್ಲಿ  ಒಬ್ಬರ ಚಿತ್ರವಿದೆ. ಟೈ ಕಟ್ಟಿ ಅತಿಥಿಗಳ ಜೊತೆ ಇರುವದನ್ನು ಚಿತ್ರದಲ್ಲಿ ನೋಡಿದಾಗ ಅತಿಥಿಗಳಲ್ಲೊಬ್ಬರೋ , ಸಂಘಟಕರಲ್ಲೊಬ್ಬರೋ ಆಗಿರಬೇಕು. ಅವರ ಕುರಿತು ವರದಿಯಲ್ಲಿ ಅಥವಾ ಚಿತ್ರದ ಅಡಿಬರಹದಲ್ಲಿ ಒಂದೇ ಒಂದು ಅಕ್ಷರವಿಲ್ಲ.  ಈ ರೀತಿ ಬೆಳವಣಿಗೆಗಳ ಹಿಂದೆ ಪತ್ರಿಕಾ ಧರ್ಮ ಮೀರಿದ ದುರುದ್ದೇಶಗಳಿರಲೇಬೇಕು.


ಇಂದು ಫೇಸ್ ಬುಕ್ ನೋಡುತ್ತಿದ್ದೆ. ಮಹಾಶಯರೊಬ್ಬರು  ತಮಗಿಷ್ಟವಿರದ  , ತಮ್ಮ ಸ್ಪರ್ಧಿಯಾಗಿರುವ ರಾಜಕಾರಣಿಯೊಬ್ಬರನ್ನು  ಖಂಡಿಸಲು  ಜನಸಾಮಾನ್ಯರು ಒಪ್ಪಿಕೊಂಡಿರುವ  ಸಂಘಟನೆಯ ಹೆಸರನ್ನು , ಮಠವೊಂದರ   ಸ್ವಾಮೀಜಿಗಳ   ಹೆಸರನ್ನು  ಬಳಸಿಕೊಂಡಿದ್ದರು.


ಈ ರೀತಿ ಸಮಾಜದಲ್ಲಿ ಬರುತ್ತಿರುವ ಬದಲಾವಣೆಗಳನ್ನು ನೋಡಿದಾಗ ಇನ್ನು ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಮಾಜ ಯಾವ ರೀತಿ ಅನಪೇಕ್ಷಿತ ಬದಲಾವಣೆಗಳತ್ತ ಸಾಗೀತು ಎಂಬುದು ಎಲ್ಲ ಸಮಾಜ ಜೀವಿಗಳು ಯೋಚಿಸಬೇಕಾದ ಅವಶ್ಯಕತೆ . 

Tuesday, August 27, 2013

ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?

ನಾನೇನೂ   ಈ ಕೃತಿ ಇನ್ನೂ ಓದಿಲ್ಲ.  ಆದರೆ ಪುಸ್ತಕ ಕುರಿತು ಇಲ್ಲಿ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ  ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ.  ಹೌದಾದರೆ ಕೃತಿ  ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು  ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ.  ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?


ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ   ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.


ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ.  ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ  ಹಾನಿಕರ.

http://epapervijayavani.in/Details.aspx?id=8093&boxid=14755119


ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.

August 27 , 2013.